Tuesday, June 24, 2008

ನನ್ನ ಗುರುಗಳ ಬಗ್ಗೆ ಎರಡು ಮಾತು


ಡಾ. ಎ.ಎಸ್. ಬಾಲಸುಬ್ರಮಣ್ಯ ನನ್ನ ಪತ್ರಿಕೋದ್ಯಮದ ಗುರುಗಳು. ಇದು ಅತ್ಯಂತ ಹೆಮ್ಮೆಯ ಹಾಗು ಅಭಿಮಾನದ ಸಂಗತಿ ನನಗೆ. ಅವರ 'ಏನಯ್ಯಾ..', 'ಮತ್ತೆನಯ್ಯ ಎಲ್ಲ ಆರಾಮ?' 'ಅದ್ಯಾಕೋ..ಹಂಗಾಡ್ತಿ..', 'ಥ್ಯಾಂಕ್ಸ್ ಕಣಯ್ಯ..'. 'ಶೀಲವಂತ..ಬಿಡು ಕಣಯ್ಯ ನಿನ್ನ ಧಾರವಾಡ ಬುದ್ಧಿ', 'ಮೊದಲು ಊರು ಬಿಡೂ'.
ಈ ಎಲ್ಲ ಮಾತುಗಳ ಹಿಂದಿನ ಕಳಕಳಿ ಇದೆಯಲ್ಲ ಅದೇ ನನ್ನಂತಹ ಸಾವಿರಾರು ವಿದ್ಯಾರ್ಥಿಗಳ ಉಪ ಪ್ರಜ್ಞೆಯಾಗಿ ಕೆಲಸ ಮಾಡಿದೆ. ಇಂದಿಗೂ ಮಾಡುತ್ತಿದೆ.
ಕಳೆದ ೨೫ ವರ್ಷಗಳಿಂದ ನಮ್ಮ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಮುನ್ನಡೆಸಿದ ರೀತಿ ಪ್ರೇರನಾದಾಯಿ.
ಮೊನ್ನೆ ನಡೆದ ನಮ್ಮ ವಿಭಾಗದ ಬೆಳ್ಳಿ ಹರ್ಷದ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದಾಗ, 'ನಾನು ಧಾರವಾಡಕ್ಕೆ ಬಂದು ಎಷ್ಟು ಬೇಗ ೨೫ ವರ್ಷಗಳಾದವು. ಇಷ್ಟು ವರ್ಷ ಪ್ರೀತಿಯಿಂದ ಪಾಠ ಮಾಡಿದ ಸಂತೃಪ್ತಿ ನನಗಿದೆ. ಪ್ರೊ. ಕುಂಬಾರ ಅವರ ಮಾರ್ಗದರ್ಶನದಲ್ಲಿ ನಾನು ಹಾಗು ಡಾ. ಗಂಗಾಧರಪ್ಪ ಮತ್ತು ಡಾ. ಎಚ್.ಕೆ.ಎಂ.ಸ್ವಾಮೀ ಶ್ರಮಿಸಿದ್ದೇವೆ. ವಿಶ್ವವಿದ್ಯಾಲಯಗಳಲ್ಲಿ ಅಭಿವೃದ್ಧಿ ಬಹಳ ನಿಧಾನಗತಿಯದ್ದು. ಇದ್ದ ಸಂಪನ್ಮೂಲಗಳನ್ನೇ ವ್ಯವಸ್ಥಿತವಾಗಿ ಬಳಸಿಕೊಂಡು ಗುರಿ ತಲುಪುವ ಅನಿವಾರ್ಯತೆ ನಮಗೆ. ಇನ್ನು ನಮ್ಮಲ್ಲಿ ಕಲಿತ ಹೋದ ವಿಧ್ಯಾರ್ಥಿಗಳು ವಿಭಾಗ ಕಟ್ಟುವ ಕೆಲಸದಲ್ಲಿ ಮನ ಮತ್ತು ಧನದ ಮೂಲಕ ಸಹಕಾರ ನೀಡಿದ್ದೆ ಆದರೆ, ಸುಸಜ್ಜಿತ ಸ್ಟುಡಿಯೋ ರೂಪುಗೊಲ್ಲುವುದರಲ್ಲಿ ಸಂಶಯವಿಲ್ಲ.'
ಆದರೆ..
ಇಲ್ಲಿ ಕಲಿತು ಹೋದ ಅದೆಷ್ಟೋ ಅಕ್ಷರ ಜೀವಿಗಳು ಕೆಟ್ಟದಾಗಿ ಮಾತನಾಡುತ್ತಾರೆ. ಇದು ಸಿನಿಕತನ. ಗೊತ್ತು, ಆದರೂ; ಅಹೋರಾತ್ರಿ ಪ್ರಸಿಧ್ಧಿ ಪಡೆಯಲು ಯಾರಾದರು ಗೌರವಾನ್ವಿತರನ್ನು ಹಿಗ್ಗ-ಮುಗ್ಗ ಬೈದು ಮಾತನಾಡುವುದು ಇಂದಿಗೂ ಪ್ರಚಲಿತದಲ್ಲಿರುವ ಹಳೆಯ ಫ್ಯಾಷನ್! ಇದು ನಮ್ಮ ಗುರುಗಳಿಗೂ, ಇತ್ತೀಚೇಗ ಮಾಸ್ತರಾಗಿರುವ ನನಗೂ ದಡ್ಡು ಬಿದ್ದ ಅನುಭವ. ಆದರೆ ಅರಿವು ಮರೆಯಿತಲ್ಲ..? ಅದು ಬೇಜಾರಿನ ಸಂಗತಿ.

Wednesday, June 18, 2008

ಅಪ್ಪ-ಅಮ್ಮ ಯಾವತ್ತು ತಮ್ಮ ಕರ್ತವ್ಯ ಮರೆತಿಲ್ಲ. ಅದಕ್ಕೆ ಸಾಕ್ಷಿ ನಾವು ಭೂಮಿಯ ಮೇಲಿರುವುದು!

ತಮ್ಮ ಹೊಟ್ಟೆ, ಬಟ್ಟೆ ಹಾಗು ನೆತ್ತಿ, ಹೌದು; ಈ ಶಬ್ದಗಳು ಅದೆಷ್ಟು ಸವಕಲಾಗಿದ್ದರು ಇಂದಿಗೂ ಅಪ್ಪ, ಅಮ್ಮ ತಮ್ಮ ಮಕ್ಕಳ ಅಭ್ಯುದಯಕ್ಕಾಗಿ ಕಟ್ಟಿ ಭವಿಷ್ಯ ರೂಪಿಸುತ್ತಾರೆ. ಆದರೆ ರೆಕ್ಕೆ ಬಲಿತ ಮೇಲೆ ಮರಿಗೆ ಇದರ ಮರೆವು! ಅಪ್ಪ- ಅಮ್ಮನಿಗೂ ಹೀಗೆಯೇ ಅವರ ಅಪ್ಪ- ಅಮ್ಮನ ನೆನಪು ಹಾರಿತ್ತೆ? ಬಹುಶ: ಇದು ಸೌಜನ್ಯದ ಪ್ರಶ್ನೆ ಅಲ್ಲ. ಇದನ್ನೇ ನಾನು ಅರಿವಿನ ಮರೆವು ಎಂದಿದ್ದು.