Tuesday, June 24, 2008

ನನ್ನ ಗುರುಗಳ ಬಗ್ಗೆ ಎರಡು ಮಾತು


ಡಾ. ಎ.ಎಸ್. ಬಾಲಸುಬ್ರಮಣ್ಯ ನನ್ನ ಪತ್ರಿಕೋದ್ಯಮದ ಗುರುಗಳು. ಇದು ಅತ್ಯಂತ ಹೆಮ್ಮೆಯ ಹಾಗು ಅಭಿಮಾನದ ಸಂಗತಿ ನನಗೆ. ಅವರ 'ಏನಯ್ಯಾ..', 'ಮತ್ತೆನಯ್ಯ ಎಲ್ಲ ಆರಾಮ?' 'ಅದ್ಯಾಕೋ..ಹಂಗಾಡ್ತಿ..', 'ಥ್ಯಾಂಕ್ಸ್ ಕಣಯ್ಯ..'. 'ಶೀಲವಂತ..ಬಿಡು ಕಣಯ್ಯ ನಿನ್ನ ಧಾರವಾಡ ಬುದ್ಧಿ', 'ಮೊದಲು ಊರು ಬಿಡೂ'.
ಈ ಎಲ್ಲ ಮಾತುಗಳ ಹಿಂದಿನ ಕಳಕಳಿ ಇದೆಯಲ್ಲ ಅದೇ ನನ್ನಂತಹ ಸಾವಿರಾರು ವಿದ್ಯಾರ್ಥಿಗಳ ಉಪ ಪ್ರಜ್ಞೆಯಾಗಿ ಕೆಲಸ ಮಾಡಿದೆ. ಇಂದಿಗೂ ಮಾಡುತ್ತಿದೆ.
ಕಳೆದ ೨೫ ವರ್ಷಗಳಿಂದ ನಮ್ಮ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಮುನ್ನಡೆಸಿದ ರೀತಿ ಪ್ರೇರನಾದಾಯಿ.
ಮೊನ್ನೆ ನಡೆದ ನಮ್ಮ ವಿಭಾಗದ ಬೆಳ್ಳಿ ಹರ್ಷದ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದಾಗ, 'ನಾನು ಧಾರವಾಡಕ್ಕೆ ಬಂದು ಎಷ್ಟು ಬೇಗ ೨೫ ವರ್ಷಗಳಾದವು. ಇಷ್ಟು ವರ್ಷ ಪ್ರೀತಿಯಿಂದ ಪಾಠ ಮಾಡಿದ ಸಂತೃಪ್ತಿ ನನಗಿದೆ. ಪ್ರೊ. ಕುಂಬಾರ ಅವರ ಮಾರ್ಗದರ್ಶನದಲ್ಲಿ ನಾನು ಹಾಗು ಡಾ. ಗಂಗಾಧರಪ್ಪ ಮತ್ತು ಡಾ. ಎಚ್.ಕೆ.ಎಂ.ಸ್ವಾಮೀ ಶ್ರಮಿಸಿದ್ದೇವೆ. ವಿಶ್ವವಿದ್ಯಾಲಯಗಳಲ್ಲಿ ಅಭಿವೃದ್ಧಿ ಬಹಳ ನಿಧಾನಗತಿಯದ್ದು. ಇದ್ದ ಸಂಪನ್ಮೂಲಗಳನ್ನೇ ವ್ಯವಸ್ಥಿತವಾಗಿ ಬಳಸಿಕೊಂಡು ಗುರಿ ತಲುಪುವ ಅನಿವಾರ್ಯತೆ ನಮಗೆ. ಇನ್ನು ನಮ್ಮಲ್ಲಿ ಕಲಿತ ಹೋದ ವಿಧ್ಯಾರ್ಥಿಗಳು ವಿಭಾಗ ಕಟ್ಟುವ ಕೆಲಸದಲ್ಲಿ ಮನ ಮತ್ತು ಧನದ ಮೂಲಕ ಸಹಕಾರ ನೀಡಿದ್ದೆ ಆದರೆ, ಸುಸಜ್ಜಿತ ಸ್ಟುಡಿಯೋ ರೂಪುಗೊಲ್ಲುವುದರಲ್ಲಿ ಸಂಶಯವಿಲ್ಲ.'
ಆದರೆ..
ಇಲ್ಲಿ ಕಲಿತು ಹೋದ ಅದೆಷ್ಟೋ ಅಕ್ಷರ ಜೀವಿಗಳು ಕೆಟ್ಟದಾಗಿ ಮಾತನಾಡುತ್ತಾರೆ. ಇದು ಸಿನಿಕತನ. ಗೊತ್ತು, ಆದರೂ; ಅಹೋರಾತ್ರಿ ಪ್ರಸಿಧ್ಧಿ ಪಡೆಯಲು ಯಾರಾದರು ಗೌರವಾನ್ವಿತರನ್ನು ಹಿಗ್ಗ-ಮುಗ್ಗ ಬೈದು ಮಾತನಾಡುವುದು ಇಂದಿಗೂ ಪ್ರಚಲಿತದಲ್ಲಿರುವ ಹಳೆಯ ಫ್ಯಾಷನ್! ಇದು ನಮ್ಮ ಗುರುಗಳಿಗೂ, ಇತ್ತೀಚೇಗ ಮಾಸ್ತರಾಗಿರುವ ನನಗೂ ದಡ್ಡು ಬಿದ್ದ ಅನುಭವ. ಆದರೆ ಅರಿವು ಮರೆಯಿತಲ್ಲ..? ಅದು ಬೇಜಾರಿನ ಸಂಗತಿ.

3 comments:

Chamaraj Savadi said...

ಪ್ರೀತಿಯ ಹರ್ಷ,

ಚೆನ್ನಾಗಿ ಬರೆದು ಗುರು ಋಣ ತೀರಿಸಲು ಯತ್ನಿಸಿದ್ದೀರಿ. ಅಕಾಡೆಮಿಕ್‌ ವಾತಾವರಣದಲ್ಲಿ ವಾಸ್ತವಿಕತೆ ಎಲ್ಲಿದೆ ಹೇಳಿ? ತರಗತಿಯಲ್ಲಿ ನಿಮಗೆ ಕಲಿಸಿದ್ದಕ್ಕೂ, ಹೊರಗಿನ ವಾತಾವರಣಕ್ಕೂ ಎಷ್ಟೊಂದು ವ್ಯತ್ಯಾಸವಿರುತ್ತದೆ. ಆದರೂ, ಮೇಷ್ಟ್ರುಗಳು ವಾಸ್ತವ ಪರಿಗಣಿಸದೇ ಓಬಿರಾಯನ ಕಾಲದ ಪಠ್ಯಗಳನ್ನು ಹೇಳುತ್ತಲೇ ಹೋಗುತ್ತಾರೆ. ಸಿಲಬಸ್‌ ಮುಗಿಸುವ ಆತುರ ಬಿಟ್ಟರೆ, ಪ್ರಾಯೋಗಿಕವಾಗಿ ಕಲಿಸುವ ಪ್ರಯತ್ನವನ್ನು ಎಷ್ಟು ಜನ ಮೇಷ್ಟ್ರು (ಬೇಕಾದ್ರೆ ಪ್ರೊಫೆಸರ್‌ ಎಂದು ಅರ್ಥ ಮಾಡಿಕೊಳ್ಳಬಹುದು) ಮಾಡುತ್ತಾರೆ?

ಇಂತಹ ವಾತಾವರಣದಿಂದ ಎದ್ದು ಹೊರಜಗತ್ತಿಗೆ ಹೋದ ವಿದ್ಯಾರ್ಥಿಗಳಿಗೆ ದಿಗ್ಭ್ರಮೆ ಉಂಟಾಗುವುದು ಸಹಜ. ಆ ದಿಗ್ಭ್ರಮೆ ಮೇಷ್ಟ್ರ ಮೇಲಿನ ಗೌರವ ನುಂಗಿ ಹಾಕುವುದೂ ಅಷ್ಟೇ ಸಹಜ. ಮನಸ್ಸು ಗೆಲ್ಲದ ಮೇಷ್ಟ್ರು ಗೌರವ ಹುಟ್ಟಿಸುವುದಾದರೂ ಹೇಗೆ? ಇದನ್ನು ಮೀರಿಯೂ ಕೆಲವರು ಕೊಬ್ಬಿನಿಂದ ವರ್ತಿಸಿದ್ದನ್ನು ನಾನೂ ನೋಡಿದ್ದೇನೆ. ಅವರ ವರ್ತನೆ ನಿಜಕ್ಕೂ ಖಂಡನಾರ್ಹ.

ಉಳಿದಂತೆ, ಮೇಷ್ಟ್ರ ಬಗ್ಗೆ ನಿಮ್ಮ ಅಭಿಪ್ರಾಯ ಒಪ್ಪುವುದು ಕಷ್ಟ ಹರ್ಷ. ಇದು ನನ್ನ ವೈಯಕ್ತಿಕ ಅನಿಸಿಕೆ.

ಬರೆಯುತ್ತಿರಿ.

- ಚಾಮರಾಜ ಸವಡಿ
http://chamarajsavadi.blogspot.net
http://sampada.net.chamaraj

Unknown said...

ಪ್ರೀತಿಯ ಸರ್,
ನಾನು ಮೊದಲು ಬಾಲಸುಬ್ರಮಣ್ಯ ಸರ್ ರನ್ನು ಭೇಟಿಯಾದದ್ದು ಎಡ್ಮೀಷನ್ ಬಗ್ಗೆ ಕೇಳಲಿಕ್ಕೆ ಡಿಪಾರ್ಟಮೆಂಟ್ ಗೆ ಹೋಗಿದ್ದಾಗ. ಅವರ ಡೈನಮಿಕ್ ಪರ್ಸನಾಲಿಟಿಗೆ ನಾನಂತೂ ಆಗಲೇ ಮಾರುಹೋಗಿಬಿಟ್ಟಿದ್ದೆ. "ಮೊದಲು ಎಂಟ್ರೆಂಸ್ ಎಗ್ಸಾಂ ಬರೀರಮ್ಮಾ, ಎಲ್ರೂ ಇಂಟ್ರೆಸ್ಟ್ ಇದ್ದೇ ಬಂದಿರ್ತಾರೆ" ಅಂತ ಹೇಳಿ ಅಲ್ಲೇ ಐದು ಜನರಲ್ ನಾಲೆಜ್ ಪ್ರಶ್ನೆಗಳನ್ನು ಕೇಳಿಬಿಟ್ಟಿದ್ದರು. ನಾನು ಥರ ಥರ ನಡುಗಿ ಒಂದಕ್ಕೆ ಮಾತ್ರ ಆನ್ಸರ್ ಮಾಡಿದ್ದೆ. "ಓದ್ ಬೇಕಮ್ಮಾ, ಹೀಗ್ ಮಾಡಿದ್ರೆ ನಡೆಯೋದಿಲ್ಲ" ಅಂದಿದ್ದರು. ನನ್ನ ಬಿ‌ಎಸ್ಸಿಯ ಸೊಕ್ಕಿಗೆ, ಅಹಂಕಾರಕ್ಕೆ ಮೊದಲ ಹೊಡೆತ ಅದು. ಅಂಥವರ ಹತ್ತಿರ ಕಲಿಯಲಾಗಲಿಲ್ಲವಲ್ಲಾ ಅಂತ ಕೌಂಸಿಲಿಂಗ್ ಆದ ಎರಡು ದಿನಗಳವರೆಗೆ ಅಳು ತಡೆದುಕೊಳ್ಳಲೇ ಆಗಿರಲಿಲ್ಲ. ಐಬಿ‌ಎಂಆರ್ ನ ಮೊದಲ ಕ್ಲಾಸಿನಲ್ಲಿ ನಿಮ್ಮ ಲೆಕ್ಚರ್ ಕೇಳಿಯಾದಮೇಲೆಯೇ ನಾನು ಸಮಾಧಾನಗೊಂಡಿದ್ದು. ಸತ್ಯವಾಗಿಯೂ.
ಕಾವ್ಯ

Unknown said...

ಹರ್ಷರೇ
ನಿಮ್ಮ ಈ ಲೇಖನ ನನ್ನ ಗುರುಗಳನ್ನು ಜ್ಞಾಪಿಸಿ ಕಣ್ಣಂಚು ತೇವ ಮಾಡಿತು